ಹಸಿಶುಂಠಿ :
ಅಡುಗೆ ಮನೆಯ ಸಾಂಬಾರ ಪದಾರ್ಥವಾಗಿ ಇದನ್ನು ನಾವು ಗುರುತಿಸಿದರೂ ಆಯುರ್ವೇದ ನೂರಾರು ವರ್ಷಗಳ ಹಿಂದೆಯೇ ಇದನ್ನೊಂದು ಅದ್ಭುತ ಔಷಧೀಯ ರೂಪದಲ್ಲಿ ನೋಡಿದೆ. ಗಂಟಲ ಬೇನೆ, ಕೆಮ್ಮು, ಶೀತ ಮೊದಲಾದ ಗಂಟಲು-ಮೂಗುಗಳಿಗೆ ಸಂಬಂಧಿಸಿದ ಸೋಂಕುಕಾರಕ ರೋಗಗಳನ್ನು ಇಲ್ಲವಾಗಿಸಲು ಶುಂಠಿ ಅತ್ಯುತ್ತಮವಾಗಿದೆ. ಇದರ ರುಚಿ ಖಾರವಾಗಿದ್ದು ಘಾಟು ವಾಸನೆಯನ್ನೂ ಹೊಂದಿರುವ ಈ ನೆಲದಡಿಯಲ್ಲಿ ಬೆಳೆಯುವ ನೈಸರ್ಗಿಕ ಗಡ್ಡೆಗೆ ಹೊಟ್ಟೆಯ ಆಮ್ಲೀಯತೆಯನ್ನು ಕಡಿಮೆ ಮಾಡಿ ಶಮನಗೊಳಿಸುವ ಗುಣವಿದೆ. ವಿಶೇಷವಾಗಿ ಮಾಸಿಕ ದಿನಗಳಲ್ಲಿ ಮಹಿಳೆಯರು ಅನುಭವಿಸುವ ಕೆಳಹೊಟ್ಟೆಯ ನೋವನ್ನು ಮತ್ತು ಸೆಡೆತವನ್ನು ನಿವಾರಿಸಲು ಸಕ್ಷಮವಾಗಿದೆ.
ದಿನಕ್ಕೊಂದು ಸೀತಾಫಲ ತಿಂದ್ರೂ ಸಾಕು, ಯಾವ ಕಾಯಿಲೆಯೂ ಹತ್ತಿರ ಸುಳಿಯಲ್ಲ!
ಬ್ಲೂಬೆರಿ ಹಣ್ಣುಗಳು :
ಇದರ ರಸದಲ್ಲಿ ಪ್ರಬಲ ಆಂಟಿ ಆಕ್ಸಿಡೆಂಟ್ ಗುಣಗಳಿವೆ ಹಾಗೂ ಉರಿಯೂತದಿಂದ ಉಂಟಾದ ಉರಿ ಮತ್ತು ನೋವನ್ನು ಇಲ್ಲವಾಗಿಸಲು ಸಹಕರಿಸುತ್ತದೆ.
ಕುಂಬಳದ ಬೀಜಗಳು.
ಕುಂಬಳಕಾಯಿ ಚೆನ್ನಾಗಿ ಬಲಿತ ಬಳಿಕ ಸಂಗ್ರಹಿಸಿದ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಮೆಗ್ನೇಶಿಯಂ ಇರುತ್ತದೆ. ಇದು ಮೈಗ್ರೇನ್ ತಲೆನೋವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅಲ್ಲದೇ ಈ ಬೀಜಗಳನ್ನು ಸೇವಿಸುತ್ತಾ ಬಂದರೆ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ಶಿಥಿಲವಾಗುವ ಓಸ್ಟಿಯೋಪೋರೋಸಿಸ್ (osteoporosis) ಎಂಬ ಕಾಯಿಲೆಯೂ ಗುಣವಾಗುತ್ತದೆ.
ಸಾಲ್ಮನ್ ಮೀನು :
ಈ ಮೀನಿನಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿದ್ದು ಹೃದಯಕ್ಕೆ ಅತ್ಯುತ್ತಮ ಆರೋಗ್ಯ ಒದಗಿಸುತ್ತದೆ. ಅಲ್ಲದೇ ಈ ಆಮ್ಲಗಳು ಮೂಳೆಗಳ ಸಂಧುಗಳಲ್ಲಿ ಜಾರುಕದ್ರವವನ್ನು ಹೆಚ್ಚಿಸಿ ಇದರ ಕೊರತೆಯಿಂದ ಉಂಟಾಗಿದ್ದ ಸಂಧುಗಳ ನೋವು ಮತ್ತು ಸಂಧಿವಾತವನ್ನು ಇಲ್ಲವಾಗಿಸುತ್ತವೆ.
ಅರಿಶಿನ :
ಅರಿಶಿನ ಯಾವುದಕ್ಕೆ ಔಷಧಿಯಲ್ಲ ಎಂದೇ ಹಿರಿಯರು ಹೇಳುತ್ತಾರೆ. ಅಂದರೆ ನಮ್ಮ ದೇಹದಲ್ಲಿ ಜರುಗುವ ನೂರಾರು ಅನೈಚ್ಛಿಕ ಕಾರ್ಯಗಳಿಗೆ ಅರಿಶಿನ ಒಂದಲ್ಲಾ ಒಂದು ರೀತಿಯಲ್ಲಿ ಸಹಕರಿಸುತ್ತದೆ. ವಿಶೇಷವಾಗಿ ಉರಿಯೂತ ನಿವಾರಕ ಗುಣ. ಈ ಬಗ್ಗೆ ನಡೆಸಿದ ಕೆಲವಾರು ಅಧ್ಯಯನಗಳಲ್ಲಿ ಸಂಧಿವಾತ, ಓಸ್ಟಿಯೋಪೋರೋಸಿಸ್ ಮೊದಲಾದ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಅವರು ಸೇವಿಸುತ್ತಿರುವ ಔಷಧಿಯ ಬದಲಾಗಿ ಅರಿಶಿನವನ್ನೇ ಔಷಧಿಯ ರೂಪದಲ್ಲಿ ನೀಡಿದಾಗ ಔಷಧಿಗಿಂತಲೂ ಉತ್ತಮವಾದ ಪರಿಣಾಮವನ್ನು ಕಂಡುಕೊಳ್ಳಲಾಗಿದೆ ಹಾಗೂ ಯಾವುದೇ ಅಡ್ಡ ಪರಿಣಾಮ ಕಾಣದಿರುವುದು ಇನ್ನೊಂದು ಹೆಗ್ಗಳಿಕೆಯಾಗಿದೆ.
ಚೆರ್ರಿ ಹಣ್ಣುಗಳು :
ಚೆರ್ರಿ ಹಣ್ಣುಗಳಲ್ಲಿ ಪ್ರಬಲ ಉರಿಯೂತ ನಿವಾರಕ ಗುಣಗಳಿವೆ ಹಾಗೂ ಸ್ನಾಯುಗಳ ನೋವನ್ನು ಬಹುತೇಕ ಇಲ್ಲವಾಗಿಸಲು ನೆರವಾಗುತ್ತದೆ.
ನಿಮಗೆ 'ದಾಳಿಂಬೆ ಸಿಪ್ಪೆಯ' ಔಷಧೀಯ ಗುಣ ಗೊತ್ತಾದರೆ, ಖಂಡಿತ ಬಿಸಾಕುವುದಿಲ್ಲ!
ತಣ್ಣನೆಯ ವಿಧಾನದಲ್ಲಿ ಸಂಗ್ರಹಿಸಿದ ಆಲಿವ್ ಎಣ್ಣೆ:
ಸಾಂಪ್ರಾದಾಯಿಕ ಗಾಣದಲ್ಲಿ ಆಲಿವ್ ಬೀಜಗಳನ್ನು ಬಿಸಿಮಾಡದೇ ಸಂಗ್ರಹಿಸಿದ ಎಣ್ಣೆಯಲ್ಲಿ ಲ್ಯೂಬ್ರಿಸಿನ್ ಎಂಬ ಅಂಶವಿರುತ್ತದೆ. ಇದು ವಿಶೇಷವಾಗಿ ಮೂಳೆಗಳ ಸಂಧುಗಳಲ್ಲಿರುವ ಜಾರುಕ ದ್ರವದ ಪ್ರಮಾಣವನ್ನು ಹೆಚ್ಚಿಸಿ ಮೂಳೆಗಳನ್ನು ರಕ್ಷಿಸುತ್ತದೆ ಹಾಗೂ ಸವೆತ ಮತ್ತು ತುಂಡಾಗುವಿಕೆಯಿಂದ ರಕ್ಷಿಸುತ್ತದೆ.
ದೊಣ್ಣೆ ಮೆಣಸು:
ದೊಣ್ಣೆಮೆಣಸಿನಲ್ಲಿರುವ ಕ್ಯಾಪ್ಸೈಸಿನ್ ಎಂಬ ಪೋಷಕಾಂಶವೇ ಇದರ ಖಾರಕ್ಕೆ ಕಾರಣ. ಇದು ನಾಲಿಗೆಗೆ ಖಾರವೇ ಹೊರತು ದೇಹಕ್ಕೆ ಮಾತ್ರ ಅತ್ಯುತ್ತಮ ಪೋಷಕಾಂಶವಾಗಿದೆ. ಅಲ್ಲದೇ ಇದು ಅತ್ಯುತ್ತಮ ನೈಸರ್ಗಿಕ ನೋವು ನಿವಾರಕವೂ ಹೌದು. ಕೆಲವು ಅಧ್ಯಯನಗಳಲ್ಲಿ ವಿವರಿಸಿದ ಪ್ರಕಾರ ಚರ್ಮದ ಉರಿಯೂತವನ್ನು ನಿವಾರಿಸಲು ದೊಣ್ಣೆಮೆಣಸನ್ನು ಸೇವಿಸಿದರೆ ಇದು ಕ್ರೀಮುಗಳನ್ನು ಹಚ್ಚಿಕೊಳ್ಳುವುದಕ್ಕಿಂತಲೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ.
ಪುದೀನಾ :
ಪುದಿನಾ ಎಲೆಗಳು ಅತ್ಯುತ್ತಮ ನೋವು ನಿವಾರಕ ಗುಣವನ್ನು ಹೊಂದಿವೆ. ಅಲ್ಲದೇ ಇದರಲ್ಲಿರುವ ಎಣ್ಣೆ ನೋವಿನಿಂದ ಕೂಡಿದ ಸೆಡೆತವನ್ನು ನಿವಾರಿಸಲು, ವಾಯುಪ್ರಕೋಪ ಹಾಗೂ ಹೊಟ್ಟೆಯುಬ್ಬರಿಕೆಯನ್ನು ಇಲ್ಲವಾಗಿಸಲು ನೆರವಾಗುತ್ತದೆ.
ಕೆಂಪು ವೈನ್ :
ಮನೆಯಲ್ಲಿಯೇ ತಯಾರಿಸಿದ ವೈನ್ ನಲ್ಲಿ ಕೆಂಪು ದ್ರಾಕ್ಷಿಯಲಿರುವ "ರೆಸ್ವೆರಾಟ್ರಾಲ್" (resveratrol)ಎಂಬ ಪೋಷಕಾಂಶ ಬೆನ್ನುಮೂಳೆಯ ಭಾಗಗಳಾದ ಡಿಸ್ಕ್ ಗಳ ಊತದಿಂದ ಎದುರಾಗುವ ಬೆನ್ನುನೋವನ್ನು ಇಲ್ಲವಾಗಿಸಲು ನೆರವಾಗುತ್ತವೆ.
No comments:
Post a Comment