ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರನ್ನು ಪ್ರತಿದಿನವೂ ಕುಡಿದರೆ ಅದರಿಂದ ಚಯಾಪಚಯ ಹೆಚ್ಚಾಗುವುದು. ಚಯಾಪಚಯ ಕಡಿಮೆ ಇರುವುದು ತೂಕ ಹೆಚ್ಚಾಗಲು ಪ್ರಮುಖ ಕಾರಣವಾಗಿರುವುದು. ಇದರಿಂದಾಗಿ ತೂಕ ಇಳಿಸಬೇಕಿದ್ದರೆ ಆಗ ಚಯಾಪಚಯವನ್ನು ಹೆಚ್ಚಿಸುವುದು ಅಗತ್ಯವಾಗಿರುವುದು.
ಮನೆಯಲ್ಲೇ ಏಲಕ್ಕಿ ನೀರನ್ನು ತಯಾರಿಸಿಕೊಳ್ಳುವುದು ಹೇಗೆ?
ಬೇಕಾಗುವ ಸಾಮಗ್ರಿಗಳು
4-5 ಏಲಕ್ಕಿ ಬೀಜಗಳು
1 ಲೋಟ ನೀರು
ವಿಧಾನ
*ಏಲಕ್ಕಿಯನ್ನು ಜಜ್ಜಿಕೊಂಡು ಅದರ ಬೀಜದ ಹುಡಿ ಮಾಡಿಕೊಳ್ಳಿ.
*ಈಗ ಜಜ್ಜಿಕೊಂಡಿರುವ ಏಲಕ್ಕಿ ಬೀಜಗಳನ್ನು ಅದರ ಸಿಪ್ಪೆ ಸಹಿತವಾಗಿ ನೀರಿಗೆ ಹಾಕಿ. ಇದರಿಂದ
ಎಲ್ಲಾ ರೀತಿಯ ಸಾರಭೂತ ತೈಲವು ನೀರಿನಲ್ಲಿ ಬೆರೆಯುವುದು.
*ರಾತ್ರಿ ವೇಳೆ ಇದನ್ನು ತಯಾರಿಸಿಕೊಂಡು ಮುಚ್ಚಲ ಮುಚ್ಚಿ ಹಾಗೆ ಬಿಡಿ. ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಿರಿ. ನಿಮಗೆ ಇದರ ಬೀಜಗಳನ್ನು ತಿನ್ನಲು ಇಷ್ಟವಿಲ್ಲದೆ ಇದ್ದರೆ ಆಗ ನೀವು ಇದನ್ನು ಸೋಸಿಕೊಂಡು ಹಾಗೆ ನೀರನ್ನು ಮಾತ್ರ ಕುಡಿಯಿರಿ.
*ಈ ನೀರನ್ನು ಕುಡಿಯುವ ಜತೆಗೆ ನೀವು ಆರೋಗ್ಯಕಾರಿ ಆಹಾರ ಕ್ರಮವನ್ನು ಕೂಡ ಪಾಲಿಸಿಕೊಂಡು ಹೋಗಬೇಕು. ಇದರೊಂದಿಗೆ ವ್ಯಾಯಾಮ ಕೂಡ ಮಾಡಿದರೆ ಆಗ ತೂಕ ಕಳೆದುಕೊಳ್ಳಲು ಸಹಕಾರಿ ಆಗಿರಲಿದೆ.
ಹೊಟ್ಟೆಯ ಭಾಗದಲ್ಲಿ ಕೊಬ್ಬು ಶೇಖರಣೆ ತಡೆಯುವುದು
ಹೊಟ್ಟೆಯ ಭಾಗದಲ್ಲಿ ಕೊಬ್ಬು ಜಮೆ ಆಗುವುದನ್ನು ಏಲಕ್ಕಿಯು ತಡೆಯುವುದು. ಪ್ರತಿನಿತ್ಯವು ಏಲಕ್ಕಿ ಜಗಿದರೆ ಆಗ ಕೊಬ್ಬು ಜಮೆ ಆಗುವುದು ತಪ್ಪುತ್ತದೆ. ಕೊಬ್ಬು ಜಮೆ ಆದರೆ ಅದರಿಂದ ಚಯಾಪಚಯದ ಮೇಲೆ ಪರಿಣಾಮ ಬೀರುವುದು ಮತ್ತು ಅಪಧಮನಿ ಸಮಸ್ಯೆ ಅಪಾಯ ಹೆಚ್ಚು ಮಾಡುವುದು.
ವಿಷವನ್ನು ಹೊರಗೆ ಹಾಕುವುದು
ಆಯುರ್ವೇದದ ಪ್ರಕಾರ ಕೆಲವೊಂದು ಕಾರಣಗಳಿಂದಾಗಿ ದೇಹದಲ್ಲಿ ಅತಿಯಾಗಿ ಅಮಾ ಅಥವಾ ವಿಷವು ಜಮೆ ಆಗುವುದು. ಈ ವಿಷವು ರಕ್ತ ಸಂಚಾರಕ್ಕೆ ಅಡ್ಡಿಪಡಿಸುವುದು ಮತ್ತು ದೇಹದ ಶಕ್ತಿ ಕಡಿಮೆ ಮಾಡುವುದು. ಏಲಕ್ಕಿಯು ಇಂತಹ ವಿಷವನ್ನು ಹೊರಗೆ ಹಾಕಲು ನೆರವಾಗುವುದು. ಏಲಕ್ಕಿ ಹಾಕಿ ಮಾಡಿದ ಚಾ ತುಂಬಾ ಪರಿಣಾಮಕಾರಿ ಆಗಿರುವುದು.
ಹೊಟ್ಟೆ ಉಬ್ಬರ ತಗ್ಗಿಸುವುದು
ಹೊಟ್ಟೆ ಉಬ್ಬರಕ್ಕೆ ಕಾರಣವಾಗುವಂತಹ ಅಜೀರ್ಣವನ್ನು ಏಲಕ್ಕಿಯು ತಡೆಯುವುದು. ಇದರಿಂದಾಗಿ ಜಠರಗರುಳಿನ ಸಮಸ್ಯೆಗಳಿಗೆ ಏಲಕ್ಕಿಯು ತುಂಬಾ ಪರಿಣಾಮಕಾರಿ ಮದ್ದಾಗಿದೆ. ಜೀರ್ಣಕ್ರಿಯೆಯು ಉತ್ತಮವಾಗಿದ್ದರೆ ಆಗ ತೂಕ ಇಳಿಸಲು ತುಂಬಾ ಸಹಕಾರಿ.
ನೀರು ನಿಲ್ಲದಂತೆ ತಡೆಯುವುದು
ನೀರು ನಿಲ್ಲುವುದು ಅಥವಾ ಹೊಟ್ಟೆ ಉಬ್ಬರವು ತೂಕ ಹೆಚ್ಚಲು ಒಂದು ಪ್ರಮುಖ ಕಾರಣವಾಗಿದೆ. ಏಲಕ್ಕಿಯಲ್ಲಿ ಇರುವಂತಹ ಕೆಲವೊಂದು ಗುಣಗಳು ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಿರುಂತಹ ನೀರನ್ನು ಮೂತ್ರದ ಮೂಲಕ ಹೊರಹಾಕಲು ನೆರವಾಗುವುದು.
ಕೊಲೆಸ್ಟ್ರಾಲ್ ತಗ್ಗಿಸುವುದು
ಕೊಬ್ಬು ತಗ್ಗಿಸುವ ಗುಣ ಹೊಂದಿರುವ ಏಲಕ್ಕಿಯು ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು. ಇದು ದೇಹದಲ್ಲಿ ಇರುವಂತಹ ಎಲ್ ಡಿಎಲ್ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ನ್ನು ತಗ್ಗಿಸುವುದು. ಅದಾಗ್ಯೂ, ಏಲಕ್ಕಿಯು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಕೂಡ ಸ್ವಲ್ಪ ತಗ್ಗಿಸುವುದು.
ವಿಜಯ ಕರ್ನಾಟಕ .
ಆಯಾಸಗೊಂಡ ಕಣ್ಣುಗಳಿಗೆ ಬರೆಯ ಕಣ್ಣು ಮುಚ್ಚಿಕೊಳ್ಳುವುದರಿಂದ ಪರಿಹಾರ ಸಿಗುವುದಿಲ್ಲ. ಇದಕ್ಕಾಗಿ ಇಲ್ಲಿವೆ ಸುಲಭ ಉಪಾಯ.
ಎರಡು ಹಸ್ತಗಳನ್ನು ಗಸಗಸನೆ ಉಜ್ಜಿಕೊಂಡು ಬಿಸಿಯಾದ ಬೆರಳುಗಳಿಂದ ಮುಚ್ಚಿರುವ ಕಣ್ಣುಗುಡ್ಡೆಗಳ ಮೇಲೆ ಹೆಚ್ಚಿನ ಒತ್ತಡವಿಲ್ಲದೆ ಇರಿಸಿದರೆ ಊದಿಕೊಂಡ, ಕೆಂಪಗಾದ ನೀರು ಸುರಿಯುತ್ತಿರುವ ಕಣ್ಣುಗಳಿಗೆ ಆರಾಮ ದೊರಕುತ್ತದೆ.
ಖ್ಯಾತ ನೇತ್ರತಜ್ಞ ಡಾ.ಬೇಟ್ಸ್ ಪ್ರಕಾರ ಈ ವಿಧಾನ ಕಣ್ಣುಗಳನ್ನು ಆರೋಗ್ಯವಾಗಿಡಲು ನೆರವಾಗುತ್ತದೆ. ಇದನ್ನು ನೆಟ್ಟಗೆ ಕುಳಿತ ಭಂಗಿಯಲ್ಲಿ ಅನುಸರಿಸಬೇಕು.
No comments:
Post a Comment