Wednesday, November 20, 2019

ಮೂತ್ರ ರೋಗ ನಿವಾರಣೆ

ಮೂತ್ರ ರೋಗ ನಿವಾರಣೆಗೆ :

♦ ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಜೇನುತುಪ್ಪವನ್ನು ಸ್ವಲ್ಪ ಸ್ವಲ್ಪ ಸೇವಿಸುತ್ತಿದ್ದರೆ ಬಹು ಮೂತ್ರ ರೋಗ ಕಡಿಮೆಯಾಗುವುದು.

♦ ಎಳನೀರಿಗೆ ನಿಂಬೆರಸವನ್ನು ಬೆರೆಸಿ ಕುಡಿದರೆ ಬಹುಮೂತ್ರ ರೋಗ ನಿವಾರಣೆ ಆಗುವುದರ ಜತೆಗೆ ಮೂತ್ರ ವಿಸರ್ಜನೆ ಸಲೀಸಾಗಿ ಆಗುವುದು.

♦ ಬಿಳಿ ದ್ರಾಕ್ಷಿಯನ್ನು ತಿನ್ನುವುದರಿಂದ ಉರಿ ಮೂತ್ರ ರೋಗ ಕಡಿಮೆಯಾಗುವುದು.

♦ ಬಾಳೆಹೂವಿನ ರಸವನ್ನು ಸೌತೆಕಾಯಿ ರಸದೊಂದಿಗೆ ಸೇರಿಸಿ ಕುಡಿದರೆ ಮೂತ್ರ ವಿಸರ್ಜನೆಯ ಅಡಚಣೆ ನಿವಾರಣೆಯಾಗುವುದು.ಜತೆಗೆ ಮೂತ್ರಕೋಶ, ಮೂತ್ರನಾಳದಲ್ಲಿ ಯಾವ ತೊಂದರೆಯೂ ಉಂಟಾಗದು.

♦ ಚಿಟಿಕೆ ಏಲಕ್ಕಿ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ, ಎಳನೀರಿನೊಂದಿಗೆ ಕುಡಿದರೆ ಮೂತ್ರ ಕಟ್ಟುವಿಕೆ ಸಡಿಲವಾಗುವುದು.

♦ ಮೊಸರನ್ನಕ್ಕೆ ಬೆಲ್ಲ ಮತ್ತು ಹುರಿದ ಕರಿಮೆಣಸು ಪುಡಿಯನ್ನು ಸೇರಿಸಿ, ಊಟ ಮಾಡುವುದರಿಂದ ಮೂತ್ರ, ಗುದದ್ವಾರದ ಉರಿ ಕಡಿಮೆ ಆಗುವುದಲ್ಲದೆ, ತೊಂದರೆ ಇಲ್ಲದೆ ಮಲ - ಮೂತ್ರ ವಿಸರ್ಜನೆಯಾಗುವುದು.

♦ ಕಬ್ಬಿನ ಹಾಲು, ಎಳನೀರು, ಹಸಿ ಶುಂಠಿ ರಸ, ನಿಂಬೆರಸ ಇವೆಲ್ಲವನ್ನು ಒಟ್ಟಿಗೆ ಸೇರಿಸಿ ಕುಡಿಯುವುದರಿಂದ ಮೂತ್ರ ಭಾದೆ ಇಲ್ಲದಂತಾಗುವುದು.

♦ ಕುದಿಸಿ ಆರಿಸಿದ ನೀರು ಕುಡಿಯುವುದರಿಂದಲೂ ಉರಿ ಮೂತ್ರ ರೋಗ ನಿವಾರಣೆ ಆಗುವುದು.

ಊರಿ ಮ‌ೂತ್ರ ನಿವಾರಣೆಗೆ

ಒಂದು ಬಟ್ಟಲು ಎಳೇನೀರಿಗೆ ಸ್ವಲ್ಪ ಬೆಲ್ಲ ಮತ್ತು ಅರ್ಧ ಟೀ ಚಮಚ ಕೊತ್ತಂಬರಿ ಬೀಜದ ಚೂರ್ಣ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಉರಿ ಮ‌ೂತ್ರ ನಿವಾರಣೆ ಆಗುವುದು

ಮೂತ್ರ ವಿಸರ್ಜನೆಗೆ ತೊಂದರೆ ಇದ್ದಾಗ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಕುದಿಸಿ ಹಾಲು ಸಕ್ಕರೆ ಬೆರೆಸಿ ಕುಡಿಯಿರಿ.

ಮಳೆಗಾಲದಲ್ಲಿ ಮೆಣಸಿನ ಉಪಯೋಗ ಫಲಕಾರಿ.೧/೨ ಚಮಚ ಉದ್ದಿನ ಬೇಳೆ,೧/೨ ಚಮಚ ಮೆಣಸು ತುಪ್ಪದಲ್ಲಿ ಹುರಿದು ಒಣ ಕೊಬ್ಬರಿ ಹಾಕಿ ರುಬ್ಬಿಕೊಳ್ಳಿ. ನೀರಿಗೆ ಹಾಕಿ ಕುದಿಸಿ. ಸ್ವಲ್ಪ ಹಾಲು ಬೆರೆಸಿ ಕುಡಿಯಿರಿ ಅಥವ ಅನ್ನ ಕಲೆಸಿ ತಿನ್ನಿ. ಮೈಯಲ್ಲಿ ಶಾಖ ಉತ್ಪನ್ನ ಮಾಡುತ್ತದೆ ಮತ್ತು ಶೀತವನ್ನು ದೂರವಿಡುತ್ತದೆ.

ನವಣೆಯನ್ನು ನೀರಿನೊಡನೆ ಅರೆದು ಲೇಪಿಸುವುದರಿಂದ ಕೀಲುಗಳ ನೋವು ಕಡಮೆಯಾಗುತ್ತದೆ.
ಕಷಾಯವನ್ನು ಕುಡಿಯುವುದರಿಂದ ಕಟ್ಟು ಮೂತ್ರ ಗುಣವಾಗುತ್ತೆ.

ನಿಂಬೆಗಿಡದ ಬೇರನ್ನು ಮತ್ತು ಹೂವನ್ನು ಅರೆದು ಅಕ್ಕಿ ತೊಳೆದ ನೀರಿನಲ್ಲಿ ಬೆರಸಿ ಕುಡಿಯುವುದರಿಂದ ಮೂತ್ರ ಮಲದ್ವಾರ ಮತ್ತು ಬಾಯಿಯಿಂದ ಬೀಳುವ ರಕ್ತವು ನಿಲ್ಲುತ್ತದೆ.

ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿಯು (ಉರಿಮೂತ್ರ ತೊಂದರೆ) ಕಂಡುಬಂದರೆ, ಕಲ್ಲಂಗಡಿ ಹಣ್ಣಿನ ರಸವನ್ನು ಮಜ್ಜಿಗೆಯ ಜೊತೆ ಸಮನಾಗಿ ಸೇರಿಸಿ, ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕುಡಿಯುವುದರಿಂದ ತೊಂದರೆಯು ಗುಣವಾಗುತ್ತದೆ.

ಒಂದು ಬಟ್ಟಲು ಕಲ್ಲಂಗಡಿ ಹಣ್ಣಿನ ರಸಕ್ಕೆ ಒಂದು ನಿಂಬೆ ಹಣ್ಣಿನ ರಸವನ್ನು ಸೇರಿಸಿ ಸೇವಿಸುವುದರಿಂದ ಜಲಾಂಶದ ಕೊರತೆಯು ನಿವಾರಣೆಯಾಗುತ್ತದೆ.

ಮಲಬದ್ಧತೆಯ ತೊಂದರೆ ಇರುವವರು ಕಲ್ಲಂಗಡಿ ಹಣ್ಣು ಹಾಗೂ ಕಲ್ಲಂಗಡಿ ಹಣ್ಣಿನ ಜ್ಯೂಸನ್ನು ಸೇವಿಸುವುದರಿಂದ ತೊಂದರೆಯು ಕಡಿಮೆಯಾಗುತ್ತದೆ.

ಉಷ್ಣ ಹೆಚ್ಚಾದರೆ ಉಷ್ಣ ಗುಳ್ಳೆ ಎಂದರೆ ಚರ್ಮದ ಮೇಲೆ ದೊಡ್ಡದಾಗಿ ಹರುಡುವಂತಹ ಕೀವು ತುಂಬಿರುವ ಗುಳ್ಳೆಯಾಗಿದೆ. ಮೊದಲು ಸಣ್ಣ ಗುಳ್ಳೆಯಂತೆ ಬಂದು ದಿನ ದಿನಾ ಹೋದಂತೆ ಕೀವು ತುಂಬಿ ದೊಡ್ಡದಾಗುತ್ತದೆ. ಇದು ಸೋಂಕಿನಿಂದ ಹರಡುವಂತಹ ರೋಗವಾಗಿದೆ.

ಅಷ್ಟೇ ಅಲ್ಲದೆ ಮೂತ್ರ ಹೋಗಲು ಕಷ್ಟವಾಗಿ ಹೋಗುತ್ತದೆ , ಒಮ್ಮೆಮ್ಮೆ ಹೊಟ್ಟೆ ನೋವು ಕಾಣಿಸಿಕೊಂಡರೆ ನರಕ ಯಾತನೆಯನ್ನೇ ಅನುಭವಿಸಬೇಕಾಗುತ್ತದೆ .

ಮುಖದ ಮೇಲೆ ಅನವಶ್ಯಕ ಗುಳ್ಳೆಗಳು ಕಾಣ ತೊಡಗುತ್ತದೆ .
ಮೂತ್ರ ಕಡು ಹಳದಿ ಬಣ್ಣಕ್ಕೆ ತಿರುಗಿ , ಹೆಚ್ಚಾಗಿ ಮೂತ್ರ ಹೊರಗಡೆ ಬಾರದೆ ಒದ್ದಾಡಬೇಕಾಗುತ್ತದೆ .

ಕಸ್ತೂರಿ ಅರಿಶಿನದ ಕೊಂಬನ್ನು ಸ್ವಲ್ಪ ನೀರನ್ನು ಹಾಕಿ ಕಲ್ಲಿನ ಮೇಲೆ ತೇಯಬೇಕು .

ಹೀಗೆ ತೇಯ್ದು ಅರ್ಧ ಚಮಚ ಅರಿಶಿನ ದೊರೆತ ಮೇಲೆ ಒಂದು ಲೋಟಕ್ಕೆ ಈ ಅರಿಶಿನವನ್ನು ಹಾಕಿಕೊಂಡು ಅರ್ಧ ಭಾಗ ನೀರು ತುಂಬಿಸಿ
ನಂತರ ಈ ಮಿಶ್ರಣಕ್ಕೆ ಒಂದು ಚಮಚ ಪುಡಿ ಬೆಲ್ಲವನ್ನು ಬೆರೆಸಿ ಚೆನ್ನಾಗಿ ಕಲಸಿ .

ಹತ್ತು ನಿಮಿಷ ಈ ಮಿಶ್ರಣವನ್ನು ತಟ್ಟೆಯ ಸಹಾಯದಿಂದ ಮುಚ್ಚಿಟ್ಟು ಹಾಗೆಯೇ ಬಿಡಬೇಕು .

ಇದಾದ ನಂತರ ಎರಡು ಹನಿ ಜೇನು ತುಪ್ಪ ಬೆರೆಸಿ ಚೆನ್ನಾಗಿ ಕಲಸಿ ಕುಡಿಯಿರಿ ಹೀಗೆ ದಿನಕ್ಕೆ ಬೆಳಗ್ಗೆ ಹಾಗು ಸಂಜೆ ಈ ಮಿಶ್ರಣ ಸೇವಿಸುತ್ತಾ ಬಂದರೆ ಉಷ್ಣ ಸಮಸ್ಯೆ ದೂರವಾಗುತ್ತದೆ .

ಅಷ್ಟೇ ಅಲ್ಲದೆ ನರಗಳ ಊತ , ಮೂಗಿನಲ್ಲಿ ರಕ್ತ ಸೋರುವ ಸಮಸ್ಯೆಗೂ ಇದು ಪರಿಣಾಮಕಾರಿ ಮನೆ ಮದ್ದು‌.

ಇಲ್ಲಿ ಬಹಳ ಟಿಪ್ಸ ಇದೆ
ನಿಮಗೆ ನಿಮ್ಮ ದೇಹಕ್ಕೆ ಹೊಂದಾಣಿಕೆ ಅಗುವ ಮನೆಮದ್ದನ್ನು ಉಪಯೋಗ ಮಾಡಿಕೊಳ್ಳಿ.

ತುಂಬಾ ನೋವಿದ್ದರೆ ಡಾಕ್ಟರ್ ಸಲಹೆ
ಪಡೆದುಕೊಳ್ಳುವುದು ಉತ್ತಮ.

No comments:

Post a Comment

ಶುಗರ್ ಹತೋಟಿಗೆ ತರಲು ಸುಲಭ ವಿಧಾನ:

ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...