ಕ್ಯಾಲ್ಸಿಯಂ ಅನ್ನುವ ಖನಿಜಾಂಶ ದೇಹಕ್ಕೆ ಅತ್ಯವಶ್ಯಕ. ಕ್ಯಾಲ್ಸಿಯಂ ಕೊರತೆ ಉಂಟಾದರೆ ಮೂಳೆಗಳು ಬಲಹೀನವಾಗುತ್ತದೆ ಎಂದು ಸಾಮಾನ್ಯವಾಗಿ ಎಲ್ಲರಿಗೆ ತಿಳಿದಿರುತ್ತದೆ. ಆದರೆ ಕ್ಯಾಲ್ಸಿಯಂ ಹೆಚ್ಚಾದರೂ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನುವ ವಿಷಯ ಗೊತ್ತೇ?
ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ 9-11mg/dlರಷ್ಟು ಇರಬೇಕು. ಇದಕ್ಕಿಂತ ಕಡಿಮೆಯಾದರೂ, ಹೆಚ್ಚಾದರೂ ಅನಾರೋಗ್ಯ ಉಂಟಾಗುವುದು. ದೇಹದಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾದರೆ ಅದನ್ನು ವೈದ್ಯಕೀಯ ಭಾಷೆಯಲ್ಲಿ ಹೈಪರ್ ಕ್ಯಾಲ್ಸಿಯಂಮಿಯಾ(hypercalcemia) ಎಂದು ಕರೆಯುತ್ತಾರೆ.
ಹೈಪರ್ ಕ್ಯಾಲ್ಸಿಯಂಮಿಯಾದ ಮೊದಲನೇ ಹಂತದಲ್ಲಿ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ. ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾದಂತೆ ಹೈಪರ್ ಕ್ಯಾಲ್ಸಿಯಂಮಿಯಾದ ಲಕ್ಷಣಗಳು ಈ ಕೆಳಗಿನಂತೆ ಇರುತ್ತವೆ:
ವಾಂತಿ
ತೇಗು ಬಂದಂತೆ ಅನಿಸುವುದು, ಇದರ ಜೊತೆಗೆ ವಾಂತಿ, ತಲೆ ಸುತ್ತು ಕೂಡ ಕಂಡು ಬರುತ್ತದೆ.
ಹೃದಯದ ಬಡಿತದಲ್ಲಿ ವ್ಯತ್ಯಾಸ
ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾದರೆ ಹೃದಯದ ಬಡಿತ ಹೆಚ್ಚಾಗುವುದು. ಇದು ECG(electrocardiogram)ಯಲ್ಲಿ ವ್ಯತ್ಯಾಸ ಉಂಟು ಮಾಡುತ್ತದೆ.
Polyuria( ಆಗಾಗ ಮೂತ್ರ ವಿಸರ್ಜನೆಗೆ)
ಆಗಾಗ ಮೂತ್ರ ವಿಸರ್ಜನೆಗೆ ಹೋಗುವುದು ಕೂಡ ಕ್ಯಾಲ್ಸಿಯಂ ಅಧಿಕವಾದರೆ ಕಂಡು ಬರುವ ಸಮಸ್ಯೆಯಾಗಿದೆ.
ಮಲಬದ್ಧತೆ
ಆಗಾಗ ಮೂತ್ರವಿಸರ್ಜನೆಗೆ ಹೋಗುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದರಿಂದ ಮಲಬದ್ಧತೆ ಉಂಟಾಗುವುದು.
ಕಿಡ್ನಿಯಲ್ಲಿ ಕಲ್ಲು
ದೇಹದಲ್ಲಿ ಕ್ಯಾಲ್ಸಿಯಂ ಅಧಿಕವಾದರೆ ಕಿಡ್ನಿಯಲ್ಲಿ ಕಲ್ಲು ಉಂಟಾಗುವುದು.
ತುಂಬಾ ಬಾಯಾರಿಕೆ
ಆಗಾಗ ಬಾಯಾರಿಕೆ ಉಂಟಾಗುವುದು, ಒಣ ತ್ವಚೆ, ಒಡೆದ ತುಟಿಗಳು ಕೂಡ ಹೈಪರ್ ಕ್ಯಾಲ್ಸಿಯಂಮಿಯಾದ ಲಕ್ಷಣಗಳಾಗಿವೆ.
ಅಸಿಡಿಟಿ
ಕ್ಯಾಲ್ಸಿಯಂ ಹೆಚ್ಚಾದರೆ ಅಸಿಡಿಟಿ ಉಂಟಾಗಿ ಅಲ್ಸರ್ ಗೆ ಕಾರಣವಾಗುತ್ತದೆ.
ಮೂಳೆ ಸಂಬಂಧಿ ಕಾಯಿಲೆಗಳು
ಕ್ಯಾಲ್ಸಿಯಂ ಜಾಸ್ತಿಯಾದರೂ ಮೂಳೆ ಸಂಬಂಧಿ ಕಾಯಿಲೆಗಳು ಕಂಡು ಬರುವುದು. ಮೂಳೆಗಳಲ್ಲಿ ನೋವು ಈ ಕಾಯಿಲೆಯ ಪ್ರಮುಖ ಲಕ್ಷಣವಾಗಿದೆ.
ನಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಉಪಯೋಗ ಮಾಡಿಕೊಂಡು ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು .ಪದೇ ಪದೇ ಹೋಗುವ ಆಸ್ಪತ್ರೆ ಗಳ ಕಾಟ ತಪ್ಪುವುದು.ದುಂದು ವೆಚ್ಚಗಳಿಗೆ ಕಡಿವಾಣ ಹಾಕಬಹುದು
Tuesday, January 14, 2020
ದೇಹದಲ್ಲಿ ಕ್ಯಾಲ್ಸಿಯಂ ಅಧಿಕವಾದರೂ ಅಪಾಯ ತಪ್ಪಿದ್ದಲ್ಲ
Subscribe to:
Post Comments (Atom)
ಶುಗರ್ ಹತೋಟಿಗೆ ತರಲು ಸುಲಭ ವಿಧಾನ:
ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...
-
ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...
-
ಅಳಲೆ ಕಾಯಿ , ತಾರೆ ಕಾಯಿ, ನೆಲ್ಲಿಕಾಯಿ,ಸಿಗೆ ಕಾಯಿ, ಅಂಟುವಾಳ ಕಾಯಿ, ಮೆಂತ್ಯ, ದಾಸವಾಳದ ಹೂ , ದಾಸವಾಳದ ಎಲೆ, ಮೆಹೆಂದಿ ಸೊಪ್ಪು, ನೀಲಿ ಸೊಪ್ಪು, ಭೃಂಗರಾಜ ಸೊಪ್ಪು,ಇಲ...
-
ಬಿಸಿನೀರಲ್ಲಿ ಕೇವಲ 5 ನಿಮಿಷ ಪಾದ ಅದ್ದಿದರೆ ಯಾವೆಲ್ಲಾ ಪ್ರಯೋಜನ ಆಗುತ್ತೆ ಗೊತ್ತಾ? * ನಮ್ಮ ಕಾಲುಗಳೇ ನಮ್ಮ ದೇಹಕ್ಕೆ ಆಧಾರಸ್ತಂಭ, ನಮ್ಮ ಇಡೀ ದೇಹ ನಿಂತಿರುವುದೇ ನಮ್ಮ...
No comments:
Post a Comment