* *ಎಳ್ಳು* :- ಬಲವರ್ಧಕ , ಉಷ್ಣ ಮತ್ತು ಪಿತ್ತಕಾರಕಕ್ಕೆ ಬಳಸಬೇಕು.
* *ಬಿಲ್ವ* :- ಜಠರಾಗ್ನಿಯನ್ನು ಉದ್ದೀಪ್ತಮಾಡಲು , ಕೃಮಿನಾಶಕವಾಗಿ , ಕಫ ಮತ್ತು ಪಿತ್ತಗಳ ಸಂತೋಲನಕ್ಕಾಗಿ ಬಳಸಬೇಕು.
* *ಸಾಸಿವೆ* :- ವಾತ ಮತ್ತು ಪಿತ್ತ ಹೆಚ್ಚಿಸಲು ಬಳಸಬೇಕು.
* *ಮೂಲಂಗಿ* :- ಆಮದೋಷದ ಉತ್ಪಾದಕ ಮತ್ತು ವಾತಕಫಗಳ ನಾಶಕವಾಗಿ ಬಳಸಬೇಕು.
* *ತರಕಾರಿ* :- ಹೃದಯ ಮತ್ತು ಕಂಠಕ್ಕೆ ಪ್ರಿಯವಾಗಿರುವುದರಿಂದ , ಎಲ್ಲಾ ದೋಷಪರಿಹರಿಸಲು ಬಳಸಬೇಕು.
* *ಸೌತೆಕಾಯಿ , ಪಡವಲಕಾಯಿ , ಹಾಗಲಕಾಯಿ* :- ಅತಿಮೂತ್ರ , ಜ್ವರ , ಶ್ವಾಸ , ಕೆಮ್ಮು , ಪಿತ್ತ , ಕಫ ನಾಶಕ್ಕೆ ಬಳಸಬೇಕು.
* *ಕುಂಬಳಕಾಯಿ* :- ಸರ್ವದೋಷ ನಾಶಕ್ಕೆ ಬಳಸಬೇಕು.
* *ನಿಂಬೆ* :- ಕಫ ಮತ್ತು ವಾತದೋಷ ನಿವಾರಕವಾಗಿ ಬಳಸಬಹುದು.
* *ದಾಳಿಂಬೆ* :- ವಾತ ದೋಷದ ನಿವಾರಕವಾಗಿ ಬಳಸಬಹುದು.
* *ಕುಂಕುಮ ಕೇಸರಿ ಮತ್ತು ಮಾತುಂಗ* :- ಕಫವಾತ ವಿನಾಶಕ ಮತ್ತು ಜಠರಾಗ್ನಿಯ ಪ್ರದೀಪ್ತಮಾಡುವುದು.
* *ಉದ್ದು* :- ವಾತ ಮತ್ತು ಪಿತ್ತದೋಷನಾಶಕವಾಗಿ ಬಳಸಬಹುದು.
* *ನೆಲ್ಲಿಕಾಯಿ* :- ಬಲಕ್ಕಾಗಿ , ಭೋಜನ ಜೀರ್ಣಕ್ಕಾಗಿ ಬಳಸಬೇಕು.
* *ಹುಣಸೆಹಣ್ಣು* :- ವಾತ ಮತ್ತು ಕಫಗಳ ದೋಷ ವಿನಾಶಕ್ಕಾಗಿ ಬಳಸಬೇಕು.
* *ನಾಗಕೇಸರಿ* :- ಕಫವಾತದೋಷ ವಿನಾಶಕ್ಕಾಗಿ ಬಳಸಬೇಕು.
* *ಬೇಲದಹಣ್ಣು* :- ಎಲ್ಲಾ ದೋಷಗಳನ್ನು ಹರಣಮಾಡುತ್ತದೆ , ವಿಷವನ್ನು ದೂರೀಕರಿಸುತ್ತದೆ , ಪಕ್ಷ್ಮವಾಗಿ ಬಳಸಬೇಕು.
* *ಮಾವಿನ ಹಣ್ಣು* :- ಮಾಂಸ ವೀರ್ಯ, ವರ್ಣ ಮತ್ತು ಶಕ್ತಿವರ್ಧನೆಗೆ ಬಳಸಬೇಕು.
* *ನೇರಳೇಹಣ್ಣು* :- ವಾತ , ಪಿತ್ತ , ಕಫ ದೋಷ ವಿನಾಶಕ್ಕಾಗಿ ಬಳಸಬೇಕು.
* *ಬೋರೆಹಣ್ಣು* :- ವಾತ ಮತ್ತು ಪಿತ್ತ ದೋಷ ನಿವಾರಣೆಗೆ ಬಳಸಬೇಕು.
ನಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಉಪಯೋಗ ಮಾಡಿಕೊಂಡು ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು .ಪದೇ ಪದೇ ಹೋಗುವ ಆಸ್ಪತ್ರೆ ಗಳ ಕಾಟ ತಪ್ಪುವುದು.ದುಂದು ವೆಚ್ಚಗಳಿಗೆ ಕಡಿವಾಣ ಹಾಕಬಹುದು
Sunday, March 15, 2020
ಔಷಧೀಯ ಯೋಗ ಸಾರ
Subscribe to:
Post Comments (Atom)
ಶುಗರ್ ಹತೋಟಿಗೆ ತರಲು ಸುಲಭ ವಿಧಾನ:
ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...
-
ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...
-
ಅಳಲೆ ಕಾಯಿ , ತಾರೆ ಕಾಯಿ, ನೆಲ್ಲಿಕಾಯಿ,ಸಿಗೆ ಕಾಯಿ, ಅಂಟುವಾಳ ಕಾಯಿ, ಮೆಂತ್ಯ, ದಾಸವಾಳದ ಹೂ , ದಾಸವಾಳದ ಎಲೆ, ಮೆಹೆಂದಿ ಸೊಪ್ಪು, ನೀಲಿ ಸೊಪ್ಪು, ಭೃಂಗರಾಜ ಸೊಪ್ಪು,ಇಲ...
-
ಬಿಸಿನೀರಲ್ಲಿ ಕೇವಲ 5 ನಿಮಿಷ ಪಾದ ಅದ್ದಿದರೆ ಯಾವೆಲ್ಲಾ ಪ್ರಯೋಜನ ಆಗುತ್ತೆ ಗೊತ್ತಾ? * ನಮ್ಮ ಕಾಲುಗಳೇ ನಮ್ಮ ದೇಹಕ್ಕೆ ಆಧಾರಸ್ತಂಭ, ನಮ್ಮ ಇಡೀ ದೇಹ ನಿಂತಿರುವುದೇ ನಮ್ಮ...
No comments:
Post a Comment